26 October, 2011

save n view the art! free download

03 October, 2011

welcome ....,

ಸುಸ್ವಾಗತಗಳು,
ಕನ್ನಡ ಬಲ್ಲ ಎಲ್ಲ ಕನ್ನಡಿಗರಿಗೂ
ಸ್ವಾಗತಗಳು

- ಅಜಿತನಾಥ್ ಜೈನ್,
welcome
to all understanding the kannada Language
readers, person's

Love,

ಪ್ರೀತಿ ಅಂದ್ರೆ ಇದೇನೆ......,

ಅಂದು, ಅವಳು ಅವನನ್ನು ನೋಡಿ ಮೋಹಕ ನಗು ಬೀರಿದಾಗ, ಅವಳು ಧರಿಸಿದ್ದ ಕೆಂಪು ಕುತರ್ಾಕ್ಕೆ ಪಿಂಕ್ ಸ್ಕೊಟಿ ಅವಳ ಸೌಂದರ್ಯಕ್ಕೆ ಮೆರಗು ನೀಡುತ್ತಿತ್ತು. ಅವನ ಪ್ರೇಮದ ಮನವಿಗೆ ಅವಳ ಪರೀಕ್ಷೆಗಳನ್ನು ದಾಟಲೇಬೇಕು. ಅವನ ನಿಸ್ವಾರ್ಥ ಪ್ರೇಮದ ,ಅಚ್ಚಳಿಯದ ಪ್ರೀತಿ ತೋರುವಲ್ಲಿ, ಅವಳು ಮಾಡುವ ಪರೀಕ್ಷೆಗಳಲ್ಲಿ, ಅವನು ರ್ಯಾಂಕ್ ಗಿಟ್ಟಿಸಲೇಬೇಕು. ಪರೀಕ್ಷಗಳೆಂಬ ಅಗ್ನಿಕುಂಡಗಳನ್ನು ಹಾದು ತಾನೊಬ್ಬ ಯಶಸ್ವಿ ಪ್ರೇಮಿ ಎಂದು ತೋರುವ, ಅವನ ಧ್ಯೆರ್ಯ ಸಾಹಸಕ್ಕೆ ಮೆಚಿ,್ಚ ಅವಳು ಕಣ್ಣೋಟದಲ್ಲಿ ಗ್ರೀನ್ಸಿಗ್ನಲ್ ನೀಡುತ್ತಾಳೆ. ಅಷ್ಟೇ, ಅವಳ ಪ್ರೀತಿ-ಪ್ರೇಮಕ್ಕೆ ಕಾದಿದ್ದವನಿಗೆ ಅಮೃತಸಿಂಚನವಾದಂತೆ ಪ್ರೀತಿಯ ಸುರಿಮಳೆಯಾದಾಗ, ಅವನ ಕಣ್ಣು ಜೀವನದ ಬಗ್ಗೆ ಭಾಷೆ ನೀಡುತ್ತದೆ. ಅವಳ ತೋರುಬೆರಳಿಗೆ ಸಿಲುಕಿ ನತರ್ಿಸುವ, ಮುಂಗುರುಳು ನೊರೆಂಟು ಕನಸು ತೋರುತ್ತವೆ. ಆಗಸದ ಕಾಮನಬಿಲ್ಲು ಅವರಿಬ್ಬರ ಪ್ರೇಮ-ಸೇತುವೆಯಾಗುತ್ತದೆ. ಅದೇ, ಅಮೃತಘಳಿಗೆಯಲ್ಲಿ ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಸುರಿವ ಜಲಧಾರೆಯ ನೀರಿನ ಹಾಗೆ, ಚುಂಬಿಸಲು ಹತ್ತಿರ ಬರುವ ಅವನು, ಕೆನ್ನೆ ಸೋಕಿದರೂ ಸೋಕದಂತೆ, ಮುತ್ತಿಟ್ಟದ್ದು ಪ್ರೇಮ ಎನ್ನುವುದು ಇದಕ್ಕೆ ಎಂದು ಜಗತ್ತಿಗೆ ಸಾರಿ ಹೇಳುವಂತಿತ್ತು. ಪ್ರೇಮಕ್ಕೆ ಕಣ್ಣಿದೆ ಎನ್ನುವುದು ಅವರೀರ್ವರ ಪ್ರಾಮಾಣಿಕ ಪ್ರೀತಿ ಕೊಗಿ, ಕೊಗಿ ಹೇಳುತ್ತಿತು. ಆಗಸದಲ್ಲಿ ದೇವತೆಗಳು ನಿಂತು ನೋಡುತಿದ್ದಾರೆನೋ ಎನ್ನುವಂತೆ ಆಕಾಶದಲ್ಲಿ ಕಾಮನಬಿಲ್ಲು ಇನ್ನಷು ವರ್ಣರಂಜಿತವಾಗಿ ಮೂಡುತ್ತಿತು.


- ಅಜಿತನಾಥ್ ಜ್ಯೆನ್, ಹರಪನಹಳ್ಳಿ

Incomplete poem


ಅಪೂರ್ಣ ಕವನ

ಹುಚ್ಚು ಹೃದಯದ ಕನವರಿಕೆ,
ನನಸು-ಕನಸ್ಸಿನ ಮೇಲೋಗರ,
ಪ್ರೀತಿಯ ಸವಿಯಂಚಿನಲ್ಲಿ,
ಪ್ರೇಮದ ಹೃದಯಗಾನ,
ಪ್ರಣಯದ ಕಾಗುಣಿತ,ನನ್ನ
ಹೃದಯದ ಹಕ್ಕಿ ಮರೆತು
ಹಾರಿದೆ ಎಲ್ಲವೂ
ನಾನಿಲ್ಲಿ,
ಅವಳೆಲ್ಲಿ?
ದಿನವೂ ಪ್ರೀತಿಯ ಹುಡುಕಾಟ,
ಹೃದಯ ಹೃದಯಗಳ
ಕವಾಟಗಳ ಮೂಲೆಯಲಿ, ಅವಳ
ನೆನಪುಗಳ ಅಲೆಯಲ್ಲಿ
ಕೊಚ್ಚಿ ಹೋಗುವ ಮುನ್ನ
ಆಗಸದ ಕಪ್ಪು ಕಾಮರ್ೋಡದ
ಹಿನ್ನಲೆಯಲ್ಲಿ, ಬಿಳಿ ಮೋಡಗಳ
ಸರತಿ ಸಾಲಿನಲ್ಲಿ.......,
- ಅಜಿತನಾಥ ಜೈನ್, ಹರಪನಹಳ್ಳಿ.

Mungaru MaLe

ಇದು ಬೇಕಿತ್ತಾ....,

ದಿನವಿಡೀ ಮುಸುಕಿದ ಕಪ್ಪು ಕಾಮರ್ೋಡ, ನಡುನಡುವೆ 'ಚುರ್' ಎನಿಸುವಷ್ಟೂ ಸೊರ್ಯನ ಬಿಸಿಲಿದ್ದರೊ, ಅರಿವಿಗೆ ಬಾರದಷ್ಟೊ ತಂಪನೆ ಹವಮಾನ. ದಿಡೀರನೆ ಸೊಯರ್ೆನೆಂಬೊ ಸೊರ್ಯನನ್ನು ನುಂಗಿ ಹಾಕಿ, ಕೊಡ ನೀರನ್ನೆ ತಾಸುಗಟ್ಟಲೆ, ಇಡೀ ಊರಿಗೆ ಜಿಟಿಜಿಟಿ ಹನಿಸುವ 'ಉತ್ತರೆ'ಯ ವ್ಯೆಯಾರದ ಮೋಡಿಯ ಮುಂದೆ ಬಿರುಬಿಸಿಲಿನ ಸೊರ್ಯ ತಣ್ಣಗಾಗಿದ್ದಾನೆ. ಬಿರುಬಿಸಿಲು ಇದ್ದಲ್ಲಿ ಜಗತ್ತನ್ನೆ ಗೆಲ್ಲುವ ಉತ್ತರ ಕನರ್ಾಟಕ ಉತ್ತರೆಯ ದಾಳಿಗೆ ಬಸವಳಿಯುತ್ತದೆ. ಒಂದೆಡೆ ರ್ಯೆತಾಪಿ ಜನರ ಸಂತಸ-ಸಂಕಟ ಉತ್ತರೆಗೊಂದು ಉತ್ತರವಾದರೆ, ಸಿಟಿಜನ'ರೆಂಬ ನಗರಗಳ ನಾಗರಿಕರ ಪಾಪದ ಅನಿಷ್ಟವನ್ನು ಎತ್ತಿ ತೋರಿಸಿ ಜನರಲ್ಲಿರುವ ಪರಿಸರದ ಬಗೆಗಿನ ಉತ್ತರನ ಪೌರುಷವನ್ನು ಎಲ್ಲರೆದರು ಡಂಗುರ ಸಾರುವ ಉತ್ತರೆ ನಮ್ಮ ಹೆಮ್ಮೆಯೇ ಸರಿ. ಛಟಿಲ್ ಎನ್ನುವ ಮಿಂಚು, ದಡಲ್'ಗುಟ್ಟುವ ಗುಡುಗು, ಈ ಎಲ್ಲವುಗಳ ನಡುವೆ ನಾಗರಿಕರ ಭ್ಯೆಗುಳ ಉತ್ತರೆಗೆ ಪ್ರೆಶ್ನೆಯಾಗೆ ಉಳಿದಿದೆ.
ಒಣಗಿದ್ದ ಕೆರೆಕಟ್ಟೆಗಳ ತುಂಬಿಸಿ ಕೋಡಿ ಹರಿಸಿ, ತಗ್ಗು ಪ್ರದೇಶದ ಜನರ ಮೇಲೆ ಕಿಂಚಿತ್ತೊ ಕಾಳಜಿ ಇಲ್ಲ. ಬೆಂಗಳೂರಿನ ರಾಜಧಾನಿಯ ಜನರಿಗೆ ಒಚಿದೇ ದಿನದಲ್ಲಿ ಕನರ್ಾಟಕದ ಐದುವರೆ ಕೋಟಿ ಜನರ ಕಷ್ಟಗಳ ದರ್ಶನ ಮಾಡಿಸಿ, ಸಕರ್ಾರಕ್ಕೆ ಪಾಠ ಹೇಳುವ ದೈರ್ಯ ಯಾರಿಗೂ ಇಲ್ಲ. ಮುಲಾಜಿಲ್ಲದೇ ನಿರ್ಸಗಕ್ಕೆ, ಪರಿಸರಕ್ಕೆ ಗೌರವ ನೀಡುವ ಭಾವನೆ ಇಲ್ಲದ ಅನಾಗರಿಕ 'ಸಿಟಿಜನ್'ರ ತೆಲೆ ಮೇಲೆ ಮೊಟಕಿ ಸರಿ ದಾರಿಗೆ ಬನ್ನಿ ಎಂದು ಹೇಳುವ ಉತ್ತರೆಗೆ ಮೆಚ್ಚುಗೆ ಸೊಚಿಸಬೇಕಾಗಿದೆ.
ಉತ್ತರೆಯ ಈ ಪಾಟಿ ಧೈರ್ಯ ಸಾಹಸ ಉಳಿದ ಮಳೆಗಳು ತೋರಿಸಿದರೆ ಏನಾಗಬಹುದು. ಈಗಾಗಲೇ 'ಹಸ್ತ'ದ ದಾಳಿ ಶುರುವಾಗಿದೆ, ' ಹಗಲು ಹಸ್ತ, ರಾತ್ರಿ ಚಿತ್ತ' ಎನ್ನುವೆಂತೆ ಹಗಲು-ರಾತ್ರಿ ಪಾಳಿಯ ಮೇಲೆ ಕುಂಭದ್ರೋಣ ಮಳೆ ಸುರಿಸಿ ಜನ, ದನ, ಮನೆ ನೀರು ಪಾಲಾಗುವ ಸುದ್ದಿ ಸಾಮಾನ್ಯವಾಗಿಸ ಹೋಗಿದೆ. ಮಳೆ,ಮಳೆ ಎಂದು ಪರಿತಪಿಸುತ್ತಿದ್ದ ನಮ್ಮ ಭಾಗದ ಜನ ಮಳೆ ಎಂದರೆ ಬೆಚ್ಚಿ ಬೀಳುವ ಪರಿಸ್ಥಿತಿ ಬಂದಿದೆ. ಎಲ್ಲಿವರೆಗೂ ನೆಡೆದರೊ ನೀರು, ನೀರು.., ಮ್ಯೆಲುಗಟ್ಟಲೇ ನೆಡೆದರೊ ಒಣ ನೆಲ ಎನ್ನುವುದು ಮರೀಚೀಕೆಯಾಗಿದೆ. ಬೆಳೆ ಕ್ಯೆಗೆ ಬಂತು ಎನ್ನುವಷ್ಟರಲ್ಲಿ ಮಳೆಯ ಆರ್ಭಟಕ್ಕೆ ರ್ಯೆತರ ಮುಖ ಕಪ್ಪಿಟ್ಟಿದೆ. ಊರಿನ ತಗ್ಗು ಪ್ರದೇಶಗಳಲ್ಲಿ ಎದೆಮಟ್ಟಕ್ಕೊ ನೀರು ಮೇಲೆರಿದೆ. ಮಳೆಗಾಲದ ಸಮಯ ದಾರಿ ತಪ್ಪಿದೆಯೇ? ಜನರಿಗೆ ಬುದ್ದಿ ಕಲಿಸಲು ' ವರುಣ ದೇವ'ನ ಮಾಸ್ತರ ಬುದ್ದಿ ಕೆಲಸ ಮಾಡುತ್ತಿರಬಹುದೇ?
ಓಟ್ಟಿನಲ್ಲಿ ಜನರ ಈ ಪರಿಸ್ಥಿತಿಗೆ ಅನೇಕ ಕಾರಣಗಳ ನಡುವೆ ಪ್ರಕೃತಿ ವಿಕೋಪ ನಿರ್ವಹಣಾ ತಂಡ ಆಸ್ತಿತ್ವಕ್ಕೆ ಬಾರದೇ ಇರುವದು, ಹಾಗೂ ಅದು ಇದ್ದರೊ ಸಹ ನಿರ್ವಹಣೆ ಮಾಡಲು ಅನುಭವ, ಸೌಕರ್ಯ, ಅದಕ್ಕೂ ಮಿಗಿಲಾಗಿ ನಿರ್ವಹಣಾ ತಂಡಕ್ಕೆ ಬೇಕಾದ ಇಚ್ಚಾಶಕ್ತಿ ಇಲ್ಲದೇ ಇರುವದೇ ಕಾರಣವಾಗಿದೆ. ಎಲ್ಲ ವಿಚಾರದಲ್ಲೂ ರಾಜಕೀಯ ಮಾಡುವ ರಾಜಕಾರಣಿಗಳು ಇಂತಹ ಪ್ರಕೃತಿ ವಿಕೋಪದ ಸಂಧರ್ಭದಲ್ಲೂ ರಾಜಕೀಯ ಮಾಡತ್ತಾ ಜನರನ್ನು ಒಚಿದು ತುತ್ತು ಕೊಳಿಗೆ ಪರದಾಡುವಚಿತೆ ಮಾಡತ್ತಿರುವುದು ದುರಂತವೆ ಸರಿ.
ಮಂದೆ ಬರಲಿರುವ ಚಿತ್ತ, ಸ್ವಾತಿ'ಯರ ಮೌನ ಏನೆಂದು ಹೇಳಬಹುದು. ಮಳೆಗಾಲದ ಕಥೆ ಮುಗಿಸುವ ಸ್ವಾತಿ ಮಳೆಗಾಲದ ಕೊನೆಗೆ ಯಾವ ಪಾಠ ಹೇಳಬಹುದು. ನಿಸರ್ಗದ ಪ್ರತಿಯೊಂದು ನೆಡೆಯೂ ನಮಗೆ ಪಾಠ ಹೇಳುತ್ತಲೆ ಬಂದಿವೆ. ನಿಸರ್ಗದ ಮಾತಿಗೆ ಕಿವಿಗೊಡುವ ಬುದ್ದಿಯನ್ನು ಇನ್ನಾದರೂ ನಮಗೆ ಬರಲಿ.

- ಅಜಿತನಾಥ್ ಜ್ಯೆನ್, ಹರಪನಹಳ್ಳಿ.

teachers of pu collages of karnataka

ಎಲ್ಲಿದ್ದಾರೆ ಶಿಕ್ಷಕರು ?
 ವೃತ್ತಿ ಕೌಶಲ್ಯ ಕಲಿಕೆಯ ಅವಶ್ಯಕತೆ ವಿದ್ಯಾಥರ್ಿಗಳಿಗೆ ಬೇಕಾದ ಈ ಸಮಯದಲ್ಲಿ ಶಿಕ್ಷಕ ವೃತ್ತಿ ಆಯ್ಕೆಯಾಗಿರಲಿ, ಅವಶ್ಯಕತೆಯಾಗಿರಲಿ ಕಾಲಕ್ಕೆ ತಕ್ಕಂತೆ ತಾವು ಕಲಿತು ತಮ್ಮ ಶಿಷ್ಯ ವರ್ಗಕ್ಕೂ ಕಲಿಸಬೇಕಾದ ಶಿಕ್ಷಕರ ಇದ್ದಾರೆಯೇ ಎಂಬುದನ್ನ ನಾವು ಗಮನಿಸಬೇಕಾಗಿದೆ. ಕೆಲಸವೇ ಮುಖ್ಯ, ಎನ್ನುವುದಕ್ಕಿಂತ, ಕೆಲಸಕ್ಕೆ ಕೊಡುವ ಸಂಬಳ, ಉಳಿದ ಸಮಯದಲ್ಲಿ ಇತರೆ ಬಿಸಿನೆಸ್ಗಳು ಜೋರು, ಜೋರು. ಸಕರ್ಾರಿ ಕಾಲೇಜ್ಗಳನ್ನು ಬಿಡಿ, ಖಾಸಗಿ ಕಾಲೇಜ್ಗಳಲ್ಲಿ ಎಂ.ಫಿಲ್ ಪದವಿ ಪಡೆದ/ಪಡೆಯಲಿರುವ ಕನ್ನಡ ಉಪನ್ಯಾಸಕರಿಗೆ ತಮ್ಮದೇ ಕಾಲೇಜಿನಲ್ಲಿರುವ ಕನ್ನಡ ಹಾಗೂ ಸ್ಯಾಹಿತ್ಯೇತೆರ ವಿಷಯಗಳ ಕೃತಿ ಓದುವ ಹವ್ಯಾಸವಿದೇಯೆ? ಪೂರಕ ಕೃತಿಗಳನ್ನು ಕೊಂಡುಕೊಳ್ಳದೇ, ಯಾವುದೇ ಹೆಚ್ಚಿನ ವಿಚಾರಗಳಿಲ್ಲದೇ, ಪಾಠ ಮಾಡುವವರು ಇರುವಾಗ ಶಿಕ್ಷಕ ವೃತ್ತಿ ಅನಿವಾರ್ಯವೇ ಇವರಿಗೆ?
ಇಂದಿಗೂ ಅನೇಕ ಜನ ಕನ್ನಡ ಉಪನ್ಯಾಸಕರು ಕುವೆಂಪು ವಿರಚಿತ 'ಶ್ರೀರಾಮಾಯಣದರ್ಶನಂ' ಬೇಡ, ಅವರ 'ಮಲೆಗಳಲ್ಲಿ ಮದುಮಗಳು' ಕೃತಿ ಓದಿದ್ದಾರೆಯೇ? ಕೇಳಿ ನೋಡಿ. ಓದುವ ಹವ್ಯಾಸವನ್ನು ಬೆಳೆಸಿಕೊಳ್ಳದ ಇವರು ತಮ್ಮ ವಿಧ್ಯಾಥರ್ಿಗಳಿಗೆ ಉಪನ್ಯಾಸಗಳ ನಡುವೆ ಪಠ್ಯಕ್ಕೆ ಪೂರಕವಾದ ವಿಷಯಗಳ ಕವಿ, ಕೃತಿಗಳ ಉಲ್ಲೇಖ ಮಾಡುವುದು. ಪಠ್ಯಪುಸ್ತಕಗಳಲ್ಲಿ ಸಿಗಲಾರದ, ಪತ್ರಿಕೆಗಳಲ್ಲಿ, ಲೇಖನಗಳಲ್ಲಿ, ಕೃತಿಗಳಲ್ಲಿ ಹೇರಳವಾಗಿ ಸಿಗುವ ಅಂಶಗಳನ್ನು, ವರ್ಣನೆಗಳನ್ನು, ವಿಚಾರಗಳನ್ನು ಹೇಳಲು ಸಾಧ್ಯವಾಗುವುದಾದರೂ ಹೇಗೆ?
' ಕೆಲಸವನ್ನು ನಿಷ್ಟೆಯಿಂದ ಮಾಡಿ, ಲಾಭವನ್ನು ನಿರೀಕ್ಷಿಸದಿರಿ' ಎಂಬ ಮಾತಿಗೆ ಒಪ್ಪುವುದಾದರೆ, ಪೂರಕ ಆಧ್ಯಯನ ಮಾಡದೆ, ವಿಧ್ಯಾಥರ್ಿಗಳಿಗೆ, ಭೋದಿಸುವ ಭೋಧನಾ ವೃತ್ತಿಗೆ ಇವರು ಯಾವ ನಿಷ್ಟೆಯಿಂದ ಇರುತ್ತಾರೆ. ಅವರು ಕೊಡುವ ಸಂಬಳಕ್ಕೆ, ಅಷ್ಟೆಲ್ಲ ಯಾರು ಕೆಲಸ ಮಾಡಬೇಕು ಎನ್ನುವ ಉಪನ್ಯಾಸಕ ಪ್ರಕಾಶ್ (ಹೆಸರುಗಳನ್ನು ಬದಲಿಸಲಾಗಿದೆ) ತನ್ನ 'ಕನ್ನಡ ಉಪನ್ಯಾಸಕ' ಎಂಬ ಹೆಸರಿಗೆ ಏನು ಗೌರವ ಕೊಟ್ಟಂತಾಯಿತು. ಪ್ರಯತ್ಯವಿಲ್ಲದೇ ಫಲ ಸಿಗುತ್ತದೆಯೇ.
ಅತ್ತ ಕಾಲೇಜು, ಇತ್ತ ವ್ಯವಸಾಯ, ವ್ಯಾಪಾರ ಮಾಡುವ ಭೋಧಕರಿದ್ದಾರೆ. ವರ್ಷವಿಡೀ ಗಮನ ಬಯಸುವ ಇವು ಭೋಧಕರಿಗೆ ಭೋಧನಾ ಪೂರ್ವ ಆಧ್ಯಯನ ಮಾಡಲು, ಸಮಯಾವಕಾಶ ಸಿಗುತ್ತದೆಯೇ?
ಪ್ರತéಿಷ್ಟಿತ ಕಾಲೇಜಿನಲ್ಲಿರುವ ಮತ್ತ್ತೋರ್ವ ಉಪನ್ಯಾಸಕ ಮಿತ್ರ ತಮ್ಮದೇ ಕಾಲೇಜಿನಲ್ಲಿರುವ ವ್ಯವಸ್ಥಿತ ಗ್ರಂಥಾಲಯದಲ್ಲಿ ಪೂರಕ ಅಂಶಗಳಿಗೆ ಒಮ್ಮೆಯೂ ಹುಡುಕಿಲ್ಲವೆಂದರೆ, ಅಂತಹ ಗ್ರಂಥಾಲಯ ಇರುವುದು ವ್ಯರ್ಥ. ಇನ್ನೂ ವಿದ್ಯಾಥರ್ಿಗಳು ಎಷ್ಟರಮಟ್ಟಿಗೆ ಗ್ರಂಥಾಲಯದ ಸದುಪಯೋಗ ಮಾಡಿಕೊಳ್ಳುವರು. ಕೇವಲ ಪಠ್ಯದ ಹಿಂದೆ ಬಿದ್ದಿರುವ ಕನ್ನಡ ಉಪನ್ಯಾಸಕರು, ಅಂಕದ ಬೆನ್ನು ಹತ್ತಿರುವ ವಿಧ್ಯಾಥರ್ಿಗಳಿಗೆ ಪೂರಕ ಅಧ್ಯಯನ ಉಪಯುಕ್ತವಾದುದು ಎಂಬುದನ್ನು ತೋರಿಸಿಕೊಡುವವರು ಯಾರು?
ಪ್ರತಿಯೊಂದಕ್ಕೂ ಲಾಭ ನಿರೀಕ್ಷಿಸುವ ಇಂದಿನ ಕಾಲದಲ್ಲಿ ಹೆಚ್ಚಿನ ಸಂಬಳವಿದ್ದರೂ ಸಹ, ಗ್ರಂಥಾಲಯದಲ್ಲಿನ ಸಾಹಿತ್ಯ ಕೃತಿಗಳ ಆಧ್ಯಯನ, ಅದರಲ್ಲಿನ ಸತ್ವ, ವಿಚಾರ ,ವಿವರ ಎಲ್ಲವನ್ನು ಸಂಗ್ರಹಿಸಿ, ಭೋಧನೆ ಮಾಡುವಾಗ ಬಳಸಿಕೊಳ್ಳುತ್ತಾರೆಯೆ? ಐದು ವರ್ಷಗಳಿಂದ ಅರೆಕಾಲಿಕನಾಗಿರುವ ಭೋಧಕನಿಗೆ ಭಾಷಣ ಬರೆದುಕೊಡಲು ಬರುವುದಿಲ್ಲವೆಂದರೆ, ಅವರು ತಮ್ಮ ಸವರ್ಿಸ್ನಲ್ಲಿ ಏನು ಕಲಿತಿದ್ದಾರೆ? ಎಂಬುದು ಯಕ್ಷಪ್ರಶ್ನೆಯಾಗುತ್ತದೆ.
ಕೆಲ ವಿಷಯಗಳಲ್ಲಿ ಅತಿ ವಿರಳವಾಗಿ ಸಿಗುವ ಉಪನ್ಯಾಸಕರು, ಮಾಡುವ ಕೆಲಸಕ್ಕೆ ಅಲ್ಲದಿದ್ದರೂ, ಕೊಡುವ ಸಂಬಳಕ್ಕೆ ಗೌರವ ನೀಡಲಾದರೂ ಅಧ್ಯಯನ ಮಾಡಲು ಸಿದ್ಧರಿಲ್ಲ. ಕಾಲೇಜಿನ ಉಪನ್ಯಾಸಕರ ಸ್ಥಿತಿ ಹೀಗಿರುವಾಗ ಹೊಲ, ಮನೆಗಳಲ್ಲಿ, ಹೋಟೆಲ್ಗಳು, ಅಂಗಡಿಗಳಲ್ಲಿ ಕೆಲಸ ಮಾಡಿ, ಪರಿಶ್ರಮದಿಂದ ಓದುವ ವಿದ್ಯಾಥರ್ಿಗಳು ಫಸ್ಟ್ಕ್ಲಾಸ್, ರ್ಯಾಂಕ್ ಬಂದರೆ, ಅವೆಲ್ಲ ಬಂದದ್ದು ತಮ್ಮಿಂದಲೇ ಎಂದು ಓದದ, ಬರೆಯದ, ಆದರೆ, ತಮ್ಮ ಬೆನ್ನು ತಟ್ಟಿಕೊಳ್ಳುವ ಉಪನ್ಯಾಸಕ ಮಹಾನುಭಾವರ ಸಂಖ್ಯೆ ಎಷ್ಟಿದೆ? ಕಾಲೇಜಿನಲ್ಲಿ ಪಾಠ ಮಾಡದ ಲೆಕ್ಚರರ್, ಟ್ಯೂಷನ್ನಲ್ಲಿ ಏನು ಪಾಠ ಮಾಡಬಹುದು. ಬೌಧ್ಧಿಕವಾಗಿ ಬೆಳೆಯಲಾರದ ಕನ್ನಡ ಉಪನ್ಯಾಸಕರು ಬಿಎಂಶ್ರೀ, ತೀನಂಶ್ರೀ, ಕುವೆಂಪು, ಮಟ್ಟಕ್ಕೇರದಿದ್ದರೂ, ಕಾಲು ಭಾಗಕ್ಕಾದರೂ ಬರಬಹುದಲ್ಲವೇ.
ಆದರೆ, ಇಂದಿನ ನಮ್ಮ ಕನ್ನಡ ಉಪನ್ಯಾಸಕ ಮಿತ್ರರಿಗೆ ಅಧ್ಯಯನವೆಂದರೆ ಅಲಜರ್ಿ. ವಿಧ್ಯಾಥರ್ಿಗಳಿಗೆ ವಿದ್ಯೆಯೇ ನಾಸ್ತಿ. ಹಿಂದಿನ ಮೇಷ್ಟ್ರುಗಳಿಗೆ ಸಿಗುತ್ತಿದ್ದ ಗೌರವ ಇಂದಿನ ಭೋಧಕರಿಗೆ ಯಾಕೆ ಸಿಗುತ್ತಿಲ್ಲವೆಂದರೆ, ಇಂದಿನ ಭೋಧನಾವರ್ಗಕ್ಕೆ ಅದ್ಯಯನವೇ ನಾಸ್ತಿ. ಇಂದಿನ ಯುವ ಜನರಿಗೆ ವೃತ್ತಿ ಒಂದು ಅವಶ್ಯಕತೆ ಅನಿವಾರ್ಯ ಆಗುತ್ತಿದೆಯೇ, ಹೊರತು ಇಚ್ಚೆ ಪಟ್ಟು ಬರುವವರ ಸಂಖ್ಯೆ ಕ್ಷೀಣಿಸುತ್ತಿದೆ, ಎಂಬುದು ಮಾತ್ರ ದುರಂತ.

_ ಅಜಿತನಾಥ ಜೈನ್. ಹರಪನಹಳ್ಳಿ

jainsm


ಸದ್ಧರ್ಮವೃದ್ದಿರಸ್ಸು


ಅದೊಂದು ದಿನ ಅರಣ್ಯದಲ್ಲಿ ಪುರೂರವನೆಂಬ ಬೇಡ ಆಹಾರಕ್ಕಾಗಿ ಸುತ್ತಾಡುತ್ತಿದ್ದಾಗ, ದೂರದಲ್ಲಿ ಮೃಗವೊಂದು ಕಂಡು ಬಾಣ ಬಿಡಲು ಸಿದ್ಧನಾದ ಆಗ, ಪುರೂರವನ ಪತ್ನಿ ತಡೆದು ಅಯ್ಯೋ ! ಅದು ಮೃಗವಲ್ಲ, ಯಾರೋ ಋಷಿಗಳು ತಪಸ್ಸು ಮಾಡುತ್ತಿದ್ದಾರೆ ಎಂದಳು. ಆಗ ಪುರೂರವ ಪತ್ನಿ ಸಮೇತ, ಮುನಿಗಳ ಹತ್ತಿರ ಹೋದ, ಮುನಿಗಳ ಸದ್ಧರ್ಮವೃದ್ದಿರಸ್ಸು ಎಂಬ ಆಶರ್ೀವಾದದ ನುಡಿಗೆ ಮಾರು ಹೋಗಿ, ಮಧ್ಯ, ಮಾಂಸದ ತ್ಯಾಗವೃತವನ್ನು ತೆಗೆದುಕೊಂಡ.
ಮುಂದಿನ ಜನ್ಮದಲ್ಲಿ ಪ್ರಥಮ ತೀರ್ಥಂಕರ ಋಷಭನಾಥರ ಪುತ್ರ ಭರತ ಚಕ್ರವತರ್ಿಗೆ ಮರೀಚಿ ಎಂಬ ಪುತ್ರನಾಗಿ ಜನಿಸಿದ. ಮುಂದೆ ಮರೀಚಿ ಮುನಿಯಾಗಿ ದೀಕ್ಷೆ ಸ್ವೀಕರಿಸಿದ. ಕಾಲಾಂತರದಲ್ಲಿ ಸರ್ವಜ್ಙರೆನಿಸಿಕೊಂಡ ಆದಿತೀರ್ಥಂಕರ ಋಷಭನಾಥರು ಮರೀಚಿ ಮುನಿಯನ್ನು ಕರೆದು, ನೀನು ಈ ಕಾಲದ ಕೊನೆಯ ತೀರ್ಥಂಕರನಾಗುವ ಭಾಗ್ಯಶಾಲಿ.., ಋಷಭನಾಥರ ಮಾತು ಮುಗಿದಿರಲಿಲ್ಲ, ಮರೀಚಿ ಮುನಿ ಹರ್ಷದಿಂದ ಹೇಳಿದ ನನ್ನ ಅಜ್ಜ ಆದಿ ತೀರ್ಥಂಕರ, ನಾನು ಅಂತಿಮ ತೀರ್ಥಂಕರ ಮುಂದೆ ಯಾರ ಮಾತು ಕಿವಿಗೆ ಬೀಳಲಿಲ್ಲ.
ಮುಂದೆ ತನ್ನ ಅಜ್ಜನ ಹಾದಿಯಲ್ಲಿ ಸಾಗಿದರೂ ತಪಸ್ಸಿನ ಕಠಿಣತೆಯನ್ನು ದಾಟಲಾಗದೇ ಸೋತು ಹೋದ, ಅಹಿಂಸಾ ಮಾರ್ಗವನ್ನು ತ್ಯಜಿಸಿದ್ದರಿಂದ, ಮನುಷ್ಯ, ದೇವ, ನರಕ, ಪ್ರಾಣಿ ಜೀವನದ ಭವಗಳಲ್ಲಿ ಸಾಗುತ್ತಾ, ಕೊನೆಗೆ ಹಿಮವತ್ಪರ್ವತದ ತಪ್ಪಲಿನಲ್ಲಿ ಸಿಂಹವಾಗಿ ಜನಿಸಿದ. ಅಲ್ಲಿ ಅವಧಿಜ್ಞಾನ ಹೊಂದಿದ ಮುನಿಗಳು 'ಸಿಂಹ'ಕ್ಕೆ ಭವಾವಳಿಗಳ ನೆನಪಿಸಿ, ಧಮರ್ೋಪದೇಶ ಮಾಡಿದರು. ಆಗ ಸಿಂಹಕ್ಕೆ ಹಿಂದಿನ ಸ್ಮರಣೆಯುಂಟಾಗಿ ನಿರಾಹಾರಿಯಾಗಿ ಸಮಾಧಿಮರಣ ಹೊಂದಿ, ಮುಂದಿನ ಹತ್ತನೇ ಜನ್ಮದಲ್ಲಿ ಇಪ್ಪತ್ನಾಲ್ಕನೇ ತೀರ್ಥಂಕರ 'ಮಹಾವೀರ'ನಾಗಿ ಜನಿಸಿದ.

ಕೇವಲ ಒಂದೇ ಒಂದು ಜನ್ಮದಲ್ಲಿ ಹಿಂಸಾಪಥಕ್ಕೆ ಇಳಿದಿದ್ದರಿಂದ ಮರೀಚಿ ನೂರಾರು ಜನ್ಮಗಳಲ್ಲಿ ಕಷ್ಟಪಡಬೇಕಾಯಿತು. ಹಿಂಸೆ, ಎಂದರೆ ಕೇವಲ ಪ್ರಾಣಿಗಳ ಮಾರಣಹೋಮ ಮಾಡುವುದಲ್ಲ. ಬದಲಾಗಿ ಅದು ವಿಶಾಲಾರ್ಥವನ್ನು ಪಡೆದುಕೊಂಡಿದೆ. ಮಾನವನಲ್ಲಿ ಮೋಹ, ಮತ್ಸರ, ಆಸೆ, ಆಮಿಷಗಳನ್ನು ಹುಟ್ಟು ಹಾಕುವುದು ಕೂಡ ಹಿಂಸೆಯೇ ಆಗಿದೆ. ಇರುವೆಯಂತಹ ಪ್ರತಿಯೊಂದು ಜೀವಿಯಲ್ಲಿಯೂ ಆತ್ಮವಿರುವುದರಿಂದ ಪ್ರತಿಯೊಂದು ಜೀವಿಗೂ ತಮ್ಮ ಜೀವವೇ ಪ್ರಿಯವಾಗಿರುತ್ತದೆ. ಎಲ್ಲಾ ಜೀವಿಗಳು ಜೀವಿಸಲು ಇಚ್ಚಿಸುತ್ತವೆ, ಯಾರು ಸಾವನ್ನಪ್ಪಲು ಇಷ್ಟಪಡುವುದಿಲ್ಲ. ಆದ್ದರಿಂದಲೇ ಪ್ರಾಣಿವಧೆ ಘೋರ ಪಾಪವಾಗಿದೆ. ಹಿಂಸೆಯೇ ಪಾಪ, ಅಹಿಂಸೆಯೇ ಪುಣ್ಯ, ಅಹಿಂಸೆಯೇ ದಯೆಯ ತಾಯಿ, ದಯವೇ ಧರ್ಮದ ಮೂಲ ಅಹಿಂಸೆಗಿಂತ ಉತ್ಕರ್ಷ ಧರ್ಮ ಬೇರೊಂದಿಲ್ಲ.
ಅಹಿಂಸಾ ತತ್ವವನ್ನು ಕ್ರಮಬದ್ಧವಾಗಿ ವಿವರಿಸಿ, ಅದರಂತೆ ಸಂಪೂರ್ಣವಾಗಿ ಆಚರಣೆಯಲ್ಲಿ ತಂದೆ ಶ್ರೇಯಸ್ಸು ಜೈನಧರ್ಮಕ್ಕಿದೆ. ಈ ಅಹಿಂಸಾವಾದದ ಪರಿಣಾಮ ಭಾರತೀಯ ಧರ್ಮಗಳ ಮೇಲೆಲ್ಲ ಆದುದು ಕಾಣಬರುತ್ತದೆ.
ಕೂರ್ರತೆಯನ್ನು ಬಿಡುವುದೇ ಶ್ರೇಷ್ಟಧರ್ಮ, ಕಂಡ ಕಂಡ ತೀರ್ಥಗಳಲ್ಲಿ ಸ್ನಾನ ಮಾಡುವುದಕ್ಕಿಂತ, ಎಲ್ಲಾ ಪ್ರಾಣಿಗಳನ್ನು ಹಿಂಸಿಸದಿರುವುದು ಎಲ್ಲಾ ಧರ್ಮಗಳಲ್ಲಿ ಶ್ರೇಷ್ಠವಾಗಿದೆ. ಎಂಬ ಉಲ್ಲೇಖ ಮಹಾಭಾರತದಲ್ಲಿ ಕಾಣಿಸುತ್ತದೆ. ಕ್ರಿ.ಶ. 12ನೇ ಶತಮಾನದಲ್ಲಿ ಬಸವಣ್ಣನವರು ಸಹ ದಯವಿಲ್ಲದ ಧರ್ಮವದೇವದಯ್ಯ ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ ಎನ್ನುವ ಮಾತು ಕ್ರಿ.ಶ. ಪೂರ್ವದಲ್ಲ್ಲಿ ಮಹಾವೀರರು ಹೇಳಿದ್ದ ಮಾತನ್ನು ಮತ್ತೇ ಪುನರುಚ್ಚರಿಸುತ್ತದೆ ಬಸವಣ್ಣನವರ ಈ ವಚನ.
ಹೀಗೆ ಪ್ರಾಚೀನ ಕಾಲದಿಂದಲೂ ಜೈನಧರ್ಮವು ಪ್ರತಿಪಾದಿಸುತ್ತಾ ಬಂದ ಅಹಿಂಸೆಯನ್ನು ಕುರಿತು ಮಹಾತ್ಮ ಗಾಂಧಿಜೀಯವರು ನಾವು ಸತ್ಯದಲ್ಲಿ ಏಕರೂಪರಾಗಲಿಕ್ಕೆ ಅಹಿಂಸೆಯೊಂದೇ ಸಾಧನವಾಗಿದೆ. ವಿಶ್ವದ ಶಾಂತಿ-ಸಮಾಧಾನ ಅಹಿಂಸೆಯಿಂದಲೇ ಸಾಧ್ಯ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಲು ಯತ್ನಿಸಿ, ಯಶಸ್ವಿಯಾದುದು ಕೂಡ ಅಹಿಂಸಾ ಪ್ರಯೋಗದಿಂದಲೇ.
ಯಹೂದಿಗಳೂ ಹೇಳುವಂತೆ ಯಾವುದು ತನಗೆ ಅಪ್ರ್ರಿಯವಾಗಿರುವುದೊ, ಅದನ್ನು ನೆರೆಯವರ ಮೇಲೆ ಪ್ರಯೋಗಿಸಬೇಡ. ಅರಬ್ಬರಲ್ಲಿನ ನುಡಿಗಟ್ಟೊಂದು ನಿನ್ನೊಡನೆ ಅನ್ಯರು ಹೇಗೆ ನಡೆದುಕೊಳ್ಳಬಾರದೆಂದು ಬಯಸುವೆಯೋ, ಅಂಥ ನಡತೆಯನ್ನು ನೀನು ಅನ್ಯರೊಡನೇ ಇಡಬೇಡ ಎಂಬುದಾಗಿದೆ. ಇಲ್ಲಿ ಪ್ರಿಯವಾಗಿರುವುದು ಅಹಿಂಸೆಯೇ.
ಎಲ್ಲ ಪ್ರಾಣಿಗಳು ತನ್ನಂತೆ ಎಂದು ಕಾಣಿಸುವುದು ಕೂಡ ಅಹಿಂಸಾ ಮಾರ್ಗವಾಗಿದೆ. ಆದರೆ, ಇಂದು ಎಲ್ಲೆಂದರಲ್ಲಿ ಸಿಡಿಯುವ ಸ್ಪೋಟಕಗಳ ಪ್ರತಿದ್ವನಿ ಕೇಳುತ್ತಿದ್ದರೆ, ಪ್ರಾಣಿಗಳ ರಕ್ಷಣೆ, ಅವುಗಳ ಜೊತೆ ಅನುಕಂಪ ಸಂಯಮದಿಂದ ವತರ್ಿಸುವುದನ್ನು ಹೇಳುವುದರ ಜೊತೆ ಜೊತೆಗೆ ಮಾನವನ ಹೆಸರನ್ನು ಸೇರಿಸಬೇಕಾಗಿದೆ. ಯಾಕೆಂದರೆ ದುಃಖ, ನೋವು, ಸಾವು, ನಿನಗೆ ಬೇಡಾದಂತೆ ಜಗದ ಮಾನವ ಪ್ರಾಣಿಯೂ ಸೇರಿದಂತೆ, ಯಾವ ಜೀವಿಗೂ ಬೇಡವಾಗಿದೆ ಎಂಬುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ. ಧರ್ಮದಿಂದ ವಿಮುಖರಾದವರು ನಿಷ್ಕಾರುಣವಾಗಿ ಎಲ್ಲವನ್ನು ಹಿಂಸಿಸುತ್ತಾರೆ. ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವವನು ಧರ್ಮವನ್ನೇ ಕೊಲೆ ಮಾಡುತ್ತಾನೆ. ದೇವರುಗಳ ಹೆಸರಿನಲ್ಲಿ ಬಲಿಯಾಗುವ ಕುರಿ, ಕೋಳಿ, ಮೇಕೆ ಎಲ್ಲವೂ ಬಲಿಯಾಗುವುದು ದೇವರ ಹೆಸರಿನಲ್ಲಿಯೇ ಹೊರತು, ದೇವರಿಂದಂತೂ ಅಲ್ಲ, ತಾಯಿಯ ಮಮತೆಯಂತೆ, ಅಹಿಂಸೆಯು ಸಕಲ ಜೀವಿಗಳಿಗೂ ಹಿತಕರವಾಗಿದೆ.
ಸಕಲ ಜೀವಿಗಳ ನಡುವೆ ಮಮತೆಯಿಂದ ಇದ್ದು ಅವುಗಳಿಗೆ ರಕ್ಷಣೆ ನೀಡಿದರೆ, ಬೇರೆ ಯಾವ ದಾನದ ಅವಶ್ಯಕತೆಯೂ ಇಲ್ಲ. ದಯವೇ ಧರ್ಮದ ಮೂಲ, ಆದ್ದರಿಂದಲೇ ಜೈನಧರ್ಮವೆಂದರೆ ಬೇರೆನಲ್ಲ, ಮಹಾವೀರರ ಪ್ರಮುಖ ಭೋದನೆಯ ಅದೇ, ಅಹಿಂಸೆ, ಅಹಿಂಸಾ ಪರಮೋಧರ್ಮಃ ಅಂದರೆ ಅಹಿಂಸೆ ಪರಮ ಶ್ರೇಷ್ಟವಾದ ಧರ್ಮ.


- ಅಜಿತನಾಥ ಜೆ, ಹರಪನಹಳ್ಳಿ

02 October, 2011

bhava pooje



ಭಾವಪೂಜೆ


ನಾವು ನಮ್ಮ ಮನಸ್ಸಿನ ನೆಮ್ಮದಿಗೆ, ಇಂದಿನ ಒತ್ತಡದ ಜೀವನದಲ್ಲಿ ಕೆಲ ಕ್ಷಣ ನಿಶ್ಚಿಂತೆಯಿಂದ ಕಳೆಯಲು ದೇವರ, ಸಂತರ ಮೊರೆಹೋಗುತ್ತೇವೆ, ಅಲ್ಲಿ ದೇವರಿಗೆ ಪೂಜೆ ಮಾಡಿಸಿ. ನಮ್ಮ ಜೀವನ ನೆಮ್ಮದಿಯಿಂದ ಇರಲು ಪ್ರಾಥರ್ಿಸುತ್ತೇವೆ. ಅಂದರೆ ಮನಸ್ಸಿನ ಶುದ್ಧಿಗಾಗಿ ನಮಗೆ ಒಂದು ಸಾಧನ ಬೇಕು, ಅದನ್ನೇ ನಾವು ಪೂಜೆಯೆಂದು ಕರೆಯುತ್ತೇವೆ. ಪೂಜೆಯಲ್ಲಿ ಎರಡು ವಿಧ.
ಮೊದಲನೇಯು 'ದ್ರವ್ಯ ಪೂಜೆ' ಜಲ, ಗಂಧ, ಅಕ್ಷತಾ, ಪುಷ್ಪ, ಧೂಪ ಮುಂತಾದ ದ್ರವ್ಯಗಳನ್ನು ಅಂದರೆ ವಸ್ತುಗಳನ್ನು ಉಪಯೋಗಿಸಿ ಪೂಜಿಸಲಾಗುತ್ತದೆ. ಒಳ್ಳೆಯ ಪರಿಣಾಮ, ಒಳ್ಳೆಯ ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ ದೇವರಿಗೆ, ನಾವು ಬೇರೆ ಬೇರೆ ವಸ್ತುಗಳನ್ನು ಅಪರ್ಿಸಿದ ಮಾತ್ರಕ್ಕೆ, ನಮಗೆ ಏನು ಫಲಸಿಗುವುದಿಲ್ಲ, ಕೆಲ ವಸ್ತುಗಳ ಅರ್ಪಣೆಯಿಂದ ಆ ದೇವರು ನಮಗೆ ಒಳ್ಳೆಯದನ್ನು ಮಾಡುತ್ತಾನೆ. ಎಂದು ಭಾವಿಸಿದರೆ ನಿಜಕ್ಕೂ ಅದು ನಮ್ಮ ಮೂರ್ಖತನವನ್ನು ಪ್ರದಶರ್ಿಸಿದಂತಾಗುತ್ತದೆ.
ಎರಡನೇಯದು ಭಾವ ಪೂಜೆ' ಯಾವುದೇ ವಸ್ತುಗಳಿಲ್ಲದೇ, ನಿಷ್ಕಲ್ಮಶ ಮನಸ್ಸಿನಿಂದ ಮಾಡುವ ಪೂಜಾ ವಿಧಾನವಿದು. ನಮ್ಮಲ್ಲಿರುವ ಅರಿಷಡ್ವರ್ಗಗಳಾದ ಕಾಮ, ಲೋಭ, ಮುಂತಾದ ವಿಕಲ್ಪಗಳನ್ನು ನಾಶಪಡಿಸುವ ಪೂಜಾ ವಿಧಾನವಿದು. ಈ ಭಾವ ಪೂಜೆಯ ಬಗ್ಗೆ ಒಂದು ದೃಷ್ಟಾಂತ ಕತೆಯಿದೆ.
ಹೀಗೆ ಒಂದು ಊರಿನಲ್ಲಿ, ನಿಮ್ಮ ಊರಿನ ಹಾಗೆ, ಆ ಊರಿನ ದೇವಸ್ಥಾನದಲ್ಲಿ, ಒಬ್ಬ ಸನ್ಯಾಸಿ ಕುಳಿತ್ತಿದ್ದರು. ಅವರ ಬಳಿ ಹೋದ ಹಳ್ಳಿಗನೊಬ್ಬ ಕೇಳಿದ ಸನ್ಯಾಸಿಯನ್ನು, ಸ್ವಾಮಿ ದೇವರ ಪೂಜೆಗೆ ಪವಿತ್ರವಾದ ವಸ್ತು ಯಾವುದು ? ಎಂದು, ಸನ್ಯಾಸಿ ಹೇಳಿದರು ಹಾಲು ಪವಿತ್ರವಾದದ್ದು, ಹಳ್ಳಿಗ ಉತ್ತರಿಸಿದ ಹಾಲನ್ನು ಕರು ಕುಡಿದಿರುತ್ತಲ್ಲ, ಅಲ್ಲಿಗೆ ಅದು ಎಂಜಲಾಯಿತಲ್ಲ ಎಂದ, ಮತ್ತೇ ಸನ್ಯಾಸಿ ಹೇಳಿದರು ಹೂವಿನಿಂದ ಪೂಜೆ ಮಾಡು ಎಂದು, ಅದು ಹೇಗೆ ಸಾಧ್ಯ ಸ್ವಾಮಿ, ಹೂವಿನ ಮೇಲೆ ದುಂಬಿ ಕುಳಿತ್ತಿರುತ್ತಲ್ಲ ಎಂದ ಹಳ್ಳಿಗ, ಮತ್ತೇ ಸನ್ಯಾಸಿ ಹೇಳಿದ ಜಲದಿಂದ ಪೂಜೆ ಮಾಡು ಹಳ್ಳಿಗ ಉತ್ತರಿಸಿದ ನೀರಿನಲ್ಲಿ ಮೀನುಗಳು ಕಪ್ಪೆಗಳು ವಾಸಿಸುವದರಿಂದ ಅದು ಎಂಜಲಲ್ಲವೇ ಎಂದದ್ದನ್ನು ಕೇಳಿ, ಸನ್ಯಾಸಿ ಬೇಸರದ ಮನಸ್ಸಿನಿಂದ ಹೇಳಿದರು ಮನಸ್ಸಿನಿಂದ ಪೂಜೆ ಮಾಡು ಎಂದಾಗ, ಆ ಹಳ್ಳಿಗ ಹೇಳಿದ ಕಾಮ, ಕ್ರೋದ, ಲೋಭ, ಮೋಹ, ಮದ ಮತ್ತು ಮತ್ಸರಗಳಿಂದ ಮನಸ್ಸು ಒಂದು ತಿಪ್ಪೆರಾಶಿಯಾಗಿದೆ. ಅಂಥ ಕೊಳಕು ಮನಸ್ಸನ್ನು ಹೇಗೆ ದೇವರಿಗೆ ಅಪರ್ಿಸಲಿ ಎಂದ. ಆಗ ಸನ್ಯಾಸಿಗೆ ಜ್ಞಾನೋದಯವಾಯಿತು. 'ನನ್ನ ಮನಸ್ಸು ಪರಿಶುದ್ಧವಿಲ್ಲದೇ ಮಾಡುವ ಪೂಜೆ ವ್ಯರ್ಥ'ವೆಂದು.
ಹೊರಗಡೆ ಭಾರಿ ಶಕ್ತಿ ಪ್ರದರ್ಶನ ಮಾಡಿ, ವೈಭವಯುತವಾಗಿ ಪೂಜಾ ವಿಧಾನಗಳ ಆಚರಣೆ ಮಾಡಿದರೆ, ಅವನೇ ಸರ್ವಶ್ರೇಷ್ಟ ಭಕ್ತ ಎಂದು ಪರಿಭಾವಿಸುವುದು ತಪ್ಪಾಗುತ್ತದೆ. ಈ ಡಂಭಾಚಾರದ ಭಕ್ತಿಯ ಪ್ರದರ್ಶನವನ್ನು ನೋಡಿ ಹನ್ನೆರೆಡನೇ ಶತಮಾನದ ವಚನಕಾರ 'ಜೇಡರ ದಾಸಿಮಯ್ಯ' ತನ್ನ ವಚನದಲ್ಲಿ ಬರುಸೆಟಗನ ಭಕ್ತಿ ದಿಟವೆಂದು ನೆಚ್ಚಲು ಭೇಡ, ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತು ಎಂದು ಆಡಂಬರದ ಭಕ್ತಿಯ ತೋರುವವರನ್ನು ಬೆಕ್ಕಿಗೆ ಹೋಲಿಸಿದ್ದಾರೆ. ಆದ್ದರಿಂದಲೇ, ನಾವು ನಮ್ಮ ಮನದಲ್ಲಿರುವ ದುಷ್ಪ ಅಲೋಚನೆಗಳನ್ನು, ದುರ್ಬದ್ದಿಯನ್ನು, ಕಿತ್ತು ಹಾಕಿ, ಕೆಲ ಕ್ಷಣ ನಿಶ್ಚಿಂತೆಯಿಂದ ಯಾವುದೇ ವಿಕಾರ ಭಾವನೆಗಳಿಗೆ ಒಳಗಾಗದೇ ಪ್ರಾಥರ್ಿಸಿ ಧ್ಯಾನ ಮಾಡಿದರೆ, ಖಂಡಿತ ನಿಮ್ಮ ಮನ ನೆಮ್ಮದಿಯ ಗೂಡಾಗುತ್ತದೆ.
ಪೂಜೆ ಮಾಡುವ ಮುನ್ನ, ನಾವು ಶುಚಿಭರ್ೂತರಾಗಿ, ಮಡಿವಸ್ತ್ರ ದರಿಸಿ ದೇವಸ್ಥಾನಕ್ಕೆ ಕಾಲಿಟ್ಟು ಪೂಜೆ ಮಾಡುವಾಗ, ನಮ್ಮ ಮನಸ್ಸು ಆ ದೇವಸ್ಥಾನದ ದೇವರಲ್ಲಿ ಇರದೇ ಅಕ್ಕ-ಪಕ್ಕ, ಹಿಂದೆ-ಮುಂದೆ ನೋಡುತ್ತಾ ಜಗತ್ತನ್ನೇ ಸುತ್ತಲು ಹೊರಡುತ್ತದೆ. ಮನಸ್ಸನ್ನು ಸ್ಥಿರತೆಯಲ್ಲಿ ಇಟ್ಟುಕೊಳ್ಳುವುದನ್ನು ಕಲಿಯದಿದ್ದರೆ, ನೀವು ಏನೇ ಪೂಜೆ ಮಾಡಿದರು, ಸಹ ನಮಗೆ ಬೇಕಾದ ಆ ಪೂಜಾ ಫಲ ಎಂದು ಸಿಗುವುದಿಲ್ಲ. ಅಂದರೆ ಸರಳವಾಗಿ ಹೇಳುವುದಾದರೆ ಒಬ್ಬ ವಿದ್ಯಾಥರ್ಿ ವರ್ಷವೀಡಿ ಅಲೆದು, ಪರೀಕ್ಷೆ ಹತ್ತಿರ ಬಂದಾಗ ಊರಿನ ಪ್ರಸಿದ್ಧ ದೇವಸ್ಥಾನಕ್ಕೆ ಹೋಗಿ ದೇವರೇ ನಾನು ಈ ಸಾರಿ ಪಾಸಗೂ ಹಾಗೇ ಮಾಡಿದರೇ 108 ಕಾಯಿ ಒಡಿತ್ತೀನಂತೆ ಹರಕೆ ಹೊತ್ತು ಪರೀಕ್ಷೆಯಲ್ಲಿ ಕಾಪಿ ಬರೆದು ಪಾಸಾಗಲಿಕ್ಕೆ ಪ್ರಯತ್ನಿಸುವ ವಿದ್ಯಾಥರ್ಿ, ಮಠದೊಳಗಿನ ಬೆಕ್ಕನ್ನು ನೆನಪಿಸುತ್ತಾನೆ. ಯಾರೇ ಇರಲಿ ಪೋಲಿ ಅಲೆದು ಬರುವ ಚಂಚಲ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡರೆ ಬರಿ ಪಾಸ ಮಾತ್ರ ಅಲ್ಲ, ರ್ಯಾಂಕ್ ಕೂಡ ಬರಬಹುದು. ನಾವು ಭಾವ ಪೂಜೆಯನ್ನು ದೇವರ ಪೂಜೆಗೆ ಮಾತ್ರ ಬಳಸಬಹುದು ಎಂಬುದನ್ನು ಬಿಟ್ಟು ಅದನ್ನು ಪ್ರತಿಯೊಂದು ಕಾರ್ಯದಲ್ಲಿ ಬಳಸಿದಲ್ಲಿ, ದಡ್ಡರಾಗಿರುವ ನಾವು ಮುಂದಿನ ದಿನಗಳಲ್ಲಿ ಪ್ರತಿಭಾನ್ವಿತರಾಗಬಹುದು.


- ಅಜಿತನಾಥ ಜೈನ್, ಹರಪನಹಳ್ಳಿ